Monday, December 31, 2007

myHarate:"ಹೊಸ ವರುಷ - ಹೀಗೊಂದು ಸ್ವಗತ"

ನಾನ್ ಬದಲಾಗಲ್ಲ.. ನಾನ್ ಇದ್ದ ಹಾಗೆ ಇರ್ತೀನಂತ ಎಷ್ಟು ಸಾರಿ ಹೆಳ್ಬೇಕು ನಿಂಗೆ.. ಅಷ್ಟು ಅರ್ಥ ಆಗಲ್ವ ನಿಂಗೆ? ಮತ್ತೆ ಮತ್ತೆ new year resolution ಎನು ಅಂತ ತಲೆ ತಿಂತೀಯಲ್ವೆ? ಪ್ರತೀ ದಿನ change change ಅಂತ ಯಾಕೆ ನನ್ನ ಗುರಾಯಿಸ್ತೀಯೆ? ಈ year ನಂಗೆ ಸುಳ್ಳು ಹೇಳಕ್ಕೆ ಇಷ್ಟ ಇಲ್ಲ ಕಣೊ / ಕಣೆ.. I am sorry.. ನಾನ್ ಸಿಟ್ಟು ಬಿಟ್ಟಿದ್ದೇನೆ.. ನಿನ್ನ್ ಹೆಚ್ಚೇನು ಬೈಯಲ್ಲ ಕಣೊ / ಕಣೆ.. ನಾನು ಇನ್ನು resolution ಇಟ್ಟುಕೊಂಡು life-ನಲ್ಲಿ change ಆಗಿ ನಿಂಗೆ flower ಬದ್ಲು flower pot ಕೊಟ್ರೆ ನಿಂಗೆ ಇಷ್ಟ ಆಗುತ್ತೆ ಎನು? so ನಾನು ನಾನಾಗಿಯೆ ಇರ್ತೇನೆ.. ನನ್ನ work ಅನ್ನು ಇನ್ನಷ್ಟು ಪ್ಲಾನ್ ಮಾಡ್ಕೊಂಡು, work ನಲ್ಲು ಮತ್ತು life-ನಲ್ಲಿ ದೊಡ್ಡ leader ಅಗ್ಬಿಟ್ಟು name ಮತ್ತು fame ಸಂಪಾದನೆ ಮಾಡ್ಬೇಕು ಅಂತೆಲ್ಲ ಆಸೆ ಇದೆ ಕಣೊ / ಕಣೆ... but ತುಂಬಾ ಎನು ಬೆಕಾಗಿಲ್ಲ.. ಎಲ್ಲಿ ನಿಮ್ಮನ್ನೆಲ್ಲ ಬಿಟ್ಟು ದೂರ ಹೊಗ್ತೀನೊ ಎಂಬ ಭಯ ಅವಾಗ ಬಂದು ಬಿಡುತ್ತೆ!!! life ಹೇಗಿದೆಯೊ ಹಾಗೇನೆ ಇರ್ಲಿ.. ಪ್ರತೀ ದಿನಾನೂ ಹೊಸ್ತು.. ಕ್ಷಣ ಕ್ಷಣದ ಸದುಪಯೊಗ ಪಡೆದು ಕೊಳ್ಳುತ್ತ ಇರೊದ್ರನ್ನ ಚೆನ್ನಾಗೆ ನಿರ್ವಹಿಸುತ್ತ ಮುಂದೆ ಹೋಗಿ.. life enjoy ಮಾಡ್ಬಿಟ್ರೆ.. ನಾಲ್ಕು ಜನ ನನ್ನನ್ನ ಒಳ್ಳೆವ ಅಂದ್ರೆ... ಅಷ್ಟೆ ಈ shan ಗೆ ಸಾಕು ಕಣೊ / ಕಣೆ... !!!

Sunday, December 30, 2007

myPOD:"Global Warming"



The attached photo has many thoughts behind it...

1. Happy new year:

A year is rolling and 2008 approaching..
Happy new year.. 2007 is a year i cannot forget for many reasons!! Hope the same 4 you too!!!

Let me wish you all first...

Wish you all very bright and prosperous new year 2008..

ಕಾಲಚಕ್ರ ಉರುಳುತಿದೆ...
ಸಾದನೆಗಳು ಅರಳುತಿದೆ
ನೆನಪುಯೇಕೆ ಮರಳುತಿದೆ?
ದೆಶಮಾತ್ರ ಉರಿಯುತಿದೆ!!!

2. Global warming:

Save earth - Its the time that gradually sea level increases because of increase in earths temperature. All these ice-candy water reaches sea and see the water waves reaching your foot every evening when you reach beach.. Save earth from Global warming..

"ನಾನೇನೂ ಸಾಹಿತಿ ಅಲ್ಲ..."
zzzzzzzzzz....ಅನ್ನೊದು ಸರಿ ಅಲ್ಲ!!!

Thursday, December 27, 2007

myHarate:"Wanna peace?"

ಜೀವವ ಕೊಲುವುದು ಅಘೋರ ಕಣೊ
ಜೀವಕೆ ಮಿಡಿವದು ಜೀವ ಕಣೊ
'ಭುಟ್ಟೊ'ಇರಲಿ ಅವಳ ಕೊಂದವನಿರಲಿ
ಜೀವಕೆ ಜೀವವೆ ಸಾಟಿ ಕಣೊ

According to me no difference in a person killed Butto and ( then killed himself ) and that of Butto. If the person who killed Butto was born in my home, he might have become a doctor to serve many life than killing many Jeeva's. Its all the Society, Culture,Education, Gurus and Friends determine the personality. Unless we get good Gurus - education system wont improve.. Unless we could improve the education system - society wont improve.. Unless the society improves such Assassination will not stop.

Try to be a part in Nation building. Make sure that such people wont raise in your family. Let see if we could avoid such people from our native place later. If every youth spend some time in improving their family, and native places on the above perspective, all indian family, society will improve and we can rock with peace during 2020!!!

Wednesday, December 26, 2007

myStupidThoughtForTheDay:"Ek Rishtha"

ರಿಶ್ತಾ ಬನಾನ ಅಸಾನ್ ಹೈ ಲೇಕಿನ್ ನಿಭಾನ ನಹೀ!!!

ಸಂಬಂಧಗಳು ದಿನೆ ದಿನೇ ಹುಟ್ಟುತ್ತಾ ಮತ್ತು ಸಾಯುತ್ತಾ ಇರುತ್ತೆ... ಕಣ್ಣೆದುರಲ್ಲೆ ಅದೆಷ್ಟೊ ಪರಿಚಿತರು ಅಲೆದಾಡುತ್ತಿರುತ್ತಾರೆ. ಆಪರಿಚಿತರೆಂದರೂ ನಗುಮೊಗದಲ್ಲಿ Hi ಅಂದ್ಬಿಟ್ಟು ಪರಿಚಯಮಾಡಿಕೊಳ್ಳುತ್ತೇವೆ.. ಅಲ್ಲೆ ಹುಟಿಕೊಳ್ಳುತ್ತೆ ಈ ರಿಶ್ತಾ. Phone Number ಇಸ್ಕೊಂಡ್ಬಿಟ್ಟು, Email id ಬರ್ಕೊಂಬಿಟ್ಟು ದಿನೆ ದಿನೇ ದೊಡ್ಡದಾಗುತ್ತ ಹೊಗುತ್ತೆ ಈ ಸಂಬಂದಗಳು. ಸಂಬಂಧ ಅಂದ್ರೆ its not just relationsip. Its also about friendship. It may be just about knowing each other and not reaching till the friendship. All important here is how many such ರಿಶ್ತೆ will be remebered very next day.. If you do so, to rember them even after a year, what you will do? Then the difficulties in Maintenance of such ರಿಶ್ತಾ comes to our Mind. Your Rishtheydaari invites to a function or party and somehow you could not attend. From very next day you become speechless for a long. Your Rishtheydaari is very close to soemone else and you are wordless!! ನಿಮ್ಮ ಸಂಬಂಧಿ ಏನೊ ನಿಮ್ಮ ಹೇಳದೆ ಕೇಳದೆ ಮುಂದೆ ಹೊಗಿರ್ತಾನೆ.. ನಿಮಿಗೆ ಯಾಕೊ ದೂರ ಹೊದಂತೆ just ಆನಿಸಿರುತ್ತೆ and ಅನಿಸಿಕೆ ರಿಶ್ತೆ ದೂರ ಮಾಡಿರುತ್ತೆ.. ಹೀಗೆ ಸಂಬಂದ ಕೆಡೋದು!!

ಯೇ ನಹೀ ಕೀ ರಿಶ್ತಾ ಬನಾಯ ತೊ ಡರ್ನ ಕ್ಯ? ಡರ್ನ ಯೇಹೈ ಕೀ ರಿಶ್ತಾ ಬನಾಯ ತೊ ನಿಭಾನ ಕೈಸ?!!!

ರಿಶ್ತಾ ನಿಭಾನೆಕೆ ಲಿಯೆ commitment ಚಾಹಿಯೆ. ರಿಶ್ತಾ ನಿಭಾನೆಕೆ ಲಿಯೆ precious time ಚಾಹಿಯೆ..
ರಿಶ್ತಾ ನಿಭಾನೆಕೆಲಿಯೆ involvement ಚಾಹಿಯೆ.. ರಿಶ್ತಾ ನಿಭಾನೆಕೆ ಲಿಯೆ good Mood ಚಾಹಿಯೆ.. Its all about a promise between you and them.

ನಿಮ್ಮ ಗೆಳೆಯ/ಗೆಳತಿಗೆ ಹ್ರುದಯದಿಂದ "ನಿನ್ನ ಸ್ನೇಹ ಎಷ್ಟು ಅಮರ ಅಂದರೆ, ಇಂದಿನ ಪ್ರತೀ ಕುಶಿ ಮತ್ತು ನೋವು ನಿನ್ನನ್ನೇ ನೆನಪಿಸುತ್ತೆ!!!" ಅನ್ನಬೇಕೆ ಹೊರತು ನಾಲಿಗೆಯಿಂದಲ್ಲ...

ಹೇ ನನ್ ಉಸಿರೇ... ನಿನ್ನ ಉಸಿರಲ್ಲಿ ನನ್ನ ಎದೆಯ ಕಂಪನ ಅವಿತಿದೆ ಮಾರಾಯ ಅಂತ ಸುಮ್ ಸುಮ್ನೆ ಹೆಳ್ಬಾರ್ದು!!..

"ಕವಿತೇ.. ನೀ ಏಕೆ ಹ್ರುದಯದಲೇ ಅವಿತು ಹೋದೆ
ನನ್ನ ಆಸೆಯೊಂದ ನೀ ಮೌನರಾಗದಲೇ ಬೆಸೆದೆ..." ಅಂತ ಮತ್ತೆ ಪರಿತಪಿಸಬಾರದು!!!

ಒಂದ್ಸಲ ಹೊದ ರಿಶ್ತೆ ಮತ್ತೆ ಬರುವುದು ಅಪರೂಪ!!! so take care of your ರಿಶ್ತೆ's!!!

Thats all for the day!!!

ಓಂ ಗಣಕಾಯ ನಮಹ:-)
ಓಂ ಏಕ Keyboardaaya ನಮಹ:-)
OS ಭೂಶಿತಾಯ ನಮಹ:-)

GM.. Have a rocking day..

myHarate:"A movie review!!!"

A movie which will touch your heart and stay there for a long..
A movie that will take you to your childhood days...
A movie that will fill your eyes with moisture when a child says "mai ithnaa buraa hai na maa?" with a lovely music form Shanlkar-Ehssan-Loy when parents makes child to stay in a boarding school from the home!
A movie having excellent script!!
A movie which you have to watch with your family and kids!!!

Yes.. don't miss it..

Hum.. let me tell the movie name.. Its "thaare zameen par"!!

Don't go 4 it if you are searching for movie having Action and Item songs.. Its all about sentiments.. How your childhood days.. How the education system should be and How the parents should be with kids.. And cant forget the laughers without comedy dialogs in this movie!! All laughs for the true acting and performance and not just for the dialogs!!

Our hero Emaan rocks with a heart catching performance..

Amir - you are the best with a unusual story direction.. You could have avoided the heroine as its just a unnecessary role.. and could have added one more kid like Emaan instead...

However movie deserves a rating of - 4/5!!!

Tuesday, December 25, 2007

myPOD:"Shabarimala yaathra"

nai abhishekam swaamikk.. swaamiye sharanam ayyappa!!!



Malla temple..



madhur temple



shabarimala yaathra..



Divine spot in dens forest opens like below in the Gods own country - shabarimala



shabarimala



shabarimala route



pilgrimage - no difference if its 11 am or 11 pm!!!



ayyappa devotee;-)



hum.. misty weather in the route to shabarimala



kaaladi...



kaaladi...



scenic periyaar river in Kaaladi - where shankaraachrya born



scenic periyaar river



guruvaayur



guruvaayur is famous for halwa and banana chips as well!!

Thursday, December 20, 2007

myHarate:"ಹೀಗೊಂದು ಕಾಲ - ಹೀಗೊಂದು ಹರಟೆ"

ಈ weatheರೆ ತೀರ ಕರಾಬಾಗಿದೆ ಕನ್ರೀ.. ರಾತ್ರೆಯೆಲ್ಲಾ ಚುಮು-ಚುಮು ಚಳಿ, ಹಗಲೆಲ್ಲ ಮೈ ಉರಿಯೊ ಶೆಕೆ, ಕಫವಿಲ್ಲದ ಕೆಮ್ಮಿನಂತಿರೊ ಮಳೆತರಲಾಗದ ಚದುರಿದ ಮೋಡಗಳು, ಮಾಮರದಲ್ಲಿ ಸವಿಗಾನದ ಬದಲು ಈಗತಾನೆ ಮೂಡಿರೊ ಚಿಗುರುಗಳ ಬಾಡೊ ಆರ್ತನಾದ, ರೋಡ್ ಪಕ್ಕ ಮುಂಜಾವಿನ ಮಂಜಿನಂತೆ ಹಾರೊ ಧೂಳು. ತೊಳೆದಿರೋ ಚಪ್ಪಲ್ ತುಂಬ ಅಂಟಿಕೊಂಡ ಧೂಳು, ಹೊಸದಾಗಿ ಹಾಕಿದ jeans ಪಕ್ಕನೂ ನೆಗಿತಾ ಇದೆ ಕನ್ರೀ. ಕೆಮ್ಮುಬಾರದಿದ್ರೂ ಕೆಮ್ಮಬೇಕೆನಿಸುತ್ತೆ ಕನ್ರೀ. ದೂಳಿಗೊಮ್ಮೆ ಕ್ಯಾಕರಿಸಿ ಉಗಿಬೇಕಂತನಿಸುತ್ತೆ ಕನ್ರೀ.. ಒಂದಲ್ಲ ಎರಡಲ್ಲ, ಎಲ್ಲ ವಿಶಯದಲ್ಲು ನಂದು complaintse ಕನ್ರೀ. ದಶಂಬರದ ಚಳಿಗಾಲ ಈ ತರ ಇರುತ್ತೆ ಅಂತ ಕನಸಿನಾಗೂ ಅನ್ಸಿಲ್ಲ ಕನ್ರೀ.. :-(

Wednesday, December 12, 2007

my800 - "ನಮ್ಮ ವಾಹನ!!"

ಬಾಳೆಗೊಂದು ಗೊನೆ
ರಾಗಿಗೊಂದು ತೆನೆ
ಮೋಡಕೊಂದು ಮಳೆ
ಭೂಮಿಬಂತು ಬೆಳೆ
ಹರುಶಗೊಂಡು ಇಳೆ
ಹರಿಸಿತಯ್ಯ ಹೊಳೆ

ಯಾರ್ಯಾರಿಗೆ ಯಾರ್?
'shan'ge ಒಂದು Car!!!

Sunday, December 9, 2007

myHarate:"Another expectation on ಗಾಳಿಪಟ after ಮುಂಗಾರು ಮಳೆ"

ನಂಗೊತ್ತು ಕಣೇ.. ಈ time ಬರೀ 420 ಕಣೆ.. ನೀ ಸಿಗದ್ರೂ ನಿನ್ನ ನೆನಪನ್ನೆ ಮತ್ತೆ ಮತ್ತೆ rewind ಮಾಡಿ ಬದುಕುತೀನಿ ಎಂದಿದ್ದ 'ಮುಂಗಾರು ಮಳೆ' ಗಣೇಶಾ 'ಗಾಳಿಪಟ'ದಲ್ಲಿ

ಕವಿತೆ,
ಯಾಕೆ ನೀ ಬರೀ ಪದಗಳಲೆ ಅವಿತೆ!

ನೀ ಸಿಗಲ್ಲಂದ್ರೂ ಮಂಡ್ಯ ಹೊಗಿ ಅಲ್ಲಿ ಮತ್ತೆ 'ಕವಿತೆ' ಎನ್ನೊ ಬಾರ್ ಒಪೆನ್ ಮಾಡಿ ಅಲ್ಲೆ full settle ಆಗ್ಬಿಡ್ತೀನಿ ಅಂತಾನೆ! ಇದು ಮುಂಗಾರಿನಂತೆ ಇನ್ನೊಂದು devdaas storyನೊ ಎಂದು ಕಾದು ನೊಡ್ಬೆಕು!

ಗಾಳಿಪಟ ಹಾರ್ಸೊದು ಬರೀ ಅಟವಲ್ಲ! ಗಾಳಿಪಟದಂತೆ ಮೇಲಕ್ಕೆ lifeನಲ್ಲಿ ಹಾರೊದು ಎಂಬ ಸಂದೇಶ ಬೇರೆ ಇದೆಯಂತೆ.. ಗಾಳಿಪಟ ಅಕಾಶದಲ್ಲಿರೊ ರಂಬೆ ಊರ್ವಶಿಯರಿಗೆ ಹಾಕಿದ 'ಗಾಳ'ವಂತೆ! ಗಾಳಿಪಟ ಚಂದ್ರಮನಿಗೆ ಕಳುಹಿಸಿದ ಪ್ರೇಮ ಪತ್ರವಂತೆ.. ಇನ್ನು ಎನೆನೋ.. ಕಾದು ನೊಡೊಣಾ!
ಮಾಸಂತ್ಯ 'ಗಾಳಿಪಟ' ತೆರೆ ಮೇಲೆ ಬರಲಿದೆ!!!

Wednesday, December 5, 2007

myHarate:"ಮಹಾಪೂಜೆ"

ಸ್ವಸ್ತಿ ಶ್ರೀ ಕ್ರಿಷ್ನ ಕ್ರಿಷ್ನಾದ್ಯ ಭಗವತೊ ಮಹಪುರುಷಸ್ಯ
-- ಆ ಉತ್ತಪ್ಪ ಎಷ್ಟು ಬಡುತ್ತು?

ಜಂಬೂ ದ್ವೀಪೇ ಭರತ ವರ್ಷೆ ಭರತ ಕಂಡೆ..
-- ಅಷ್ಟು ಜೊರಾಗಿ ಬಡುದರೆ ಬ್ಯಾಟು ತುಂಡೆ!!
--ಪಾರ್ವತಿಯ ಮನೆಂದ ಅಟ್ಟಿದವೊ (parvathis one of the character in family senti mega serial!)?

ಶಾಲಿವಾಹನ ಶಕೆ ಅಸ್ಮಿನ್ ವರ್ತಮಾನ ವ್ಯವಹಾರಿಕೆ
-- ಭಾರತ ಗೆಲ್ಲಲಿ ಎಂಬುದೆ ನಮ್ಮ ಹಾರೈಕೆ!
-- ಇವು ಹೀಂಗೆ ಆಡಿರೆ ಸೊಲುದು ಗ್ಯಾರಂಟಿ...

ದ್ವಾದಶ ನಾಮ ಪೂಜಂ ಕರಿಷ್ಯೆ!
ಸುಮುಖಾಯ ನಮಹ.. ಎಕದಂತಾಯ ನಮಹ!
--ಈ ಸಚಿನ್ ನ ಇಂದು ಮದಲೆ ಕಲ್ಸಿದ್ದವ? ಅತ ದ್ವಾದಶ ನಾಮ ಪೂಜಂ ಸಮರ್ಪಯಾಮಿ..

ನೈವೆದ್ಯಂ..
-- ಹಾಲು ತೆಕ್ಕೊಂಡು ಬನ್ನಿ.. (a call to the main lady in the house )
-- ಒಂದು ನಿಮಿಶ ನಿಲ್ಲಿ.. ಈಗ ಬಂದೆ.. (ದೇವರಿಗೆ ಹಸಿವು ಇಲ್ಲವೆನೊ?)
-- ಆ ಮಿಂಚು ಎಂತಾತು ಕೂಸೆ? (This also one of the mega serial)

ರಾಜಾದಿ ರಾಜಾಯ (ಪ್ರ)ಅಸಹ್ಯ ಸಾಹಿನೆ...
-- ಈ ಶೊಯಬ್ ಅಕ್ತರ್ ಇನ್ನೂ ಸಾಯನೆ?

ಯೊ ವೇದಾದವ್ ಸ್ವರಪ್ರೊಕ್ತೊ
-- ಈ ಬಾಲ್ ಆದರು sixer ಹೋತೊ?

ತಸ್ಯ ಪ್ರಕ್ರುತ ಲೀನಸ್ಯ
-- ಈ fielder ಗಳ ಆಲಸ್ಯ!

ಯ ಪರಸ್ಯ ಮಹೇಶ್ವರ
-- ಭಾರತದ ಗತಿ ಎಂತರ?

ಶಂಖ ಮದ್ಯ ಸ್ತಿತಂ ತೋಯಂ...

ಅನಾಯಾಸೇನ ಮರಣಮ್ ವಿನಾ ದೈನ್ಯೇನ ಜೀವನಮ್
ದೇಹಿ ಮೆ ಕ್ರಿಪಯಾ ಶಂಭೊ ತ್ವಯಿ ಭಕ್ತಿ ಅಚಂಚಲಮ್
ಏನು ಅದ್ಬುತ ವಾಕ್ಯ!
-- ತೀರ್ಥಕ್ಕೆ ಆತು ಬನ್ನಿ..

ದಿನ ನಿತ್ಯದ ಪೂಜೆ ಕೆಲವೊಮ್ಮೆ ದೇವರಿಗೆ ಸಲ್ಲುದು ಹೀಗೆ ನೊಡಿ!!! ದೇವರಿಗೆ ಪೂಜೆಯೊಂದಿಗೆ ಉಪಯುಕ್ತ ಮಾಹಿತಿ ಲಭ್ಯವಾಗುವುದನ್ನ ಇಷ್ಟ ಪಡುತ್ತಾರೊ ಇಲ್ಲವೊ ಅವರಿಗೆ ಬಿಟ್ಟಿದ್ದು!!!

Sunday, November 25, 2007

myHarate:"Radio Era"

Gone are the days when we used to wait for a song after tuning Al India Radio and get thrilled when our name gets announced after reading the posted letter to the Radio station. Recently all Radio sets are disappeared from the place it occupied earlier. All such sweet memories are erased by TV. It made us to sit and watch in-front of it by disturbing our daily routines All our work gets stalled when TV is ON unlike the Radio. Many utensils burnt in the Kitchen.. and we lost the timesence .. We could not even talk to friends or guests who come-in to our house.. instead TV talks, cant even call Mom when Indian Idol is going on in Sony..

Yesterday, My old deck set having a FM tuner occupied its old place. We can tune to Radio Mirchi in Udupi with Frequency 98.3!! Wordings such as "Sakhath Hot Maga" thrilled the both of the ears.. 24/7 programs excited all young hearts!! No surprise if we hear it in Rikshaw, Buses and all such vehicles. Radio era hits back!!!!

Thursday, November 22, 2007

myPOD:"ಬೆಳಕಿನ ಚಮತ್ಕಾರ"

myPOD:""ಉಡುಪಿ:ಲಕ್ಷದೀಪೋತ್ಸವ""

ಉತ್ತಾನ ದ್ವಾದಶಿ: ತುಲಸೀ ಪೂಜಾ ಕರಿಶ್ಯತಿ



ದೀಪದಿಂದ ದೀಪವ
ಹಚ್ಚಬೇಕು ಮಾನವ
ನಿಶೆಯೆಂಬ ಕೊಳಕು ಓಡಲು



ಪುನರಪಿ ಬೆಳಕು ಪುನರಪಿ ಕತ್ತಲು
ಪುನರಪಿ ಜಾತ್ರೆ ಪುನರಪಿ ಸುಂದರ
ಪುನರಪಿ ಕ್ಯಾಮರ ಜಟರೇ ಶಯನಂ
ಪುನರಪಿ ನಿಮ್ಮಯ ಕಡೆಗೇ ಪಯಣಂ

Thursday, November 15, 2007

myPOD:"ತಮಸೋಮಾ ಜ್ಯೊತಿರ್ಗಮಯ"


ಅಷ್ಟು ಹತ್ತಿರ ಬೆಂಕಿಯ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ತುಳಸಿ ಪೂಜಾ ಕಾರ್ಯದಿಂದ ವಿಚಲಿತನಾಗದ ಆಣ್ಣ, ಪೂಜೆಯೊಡನೆ ಪಟಾಕಿಯನ್ನ ಸಂಭ್ರಮಿಸುತ್ತಿರುವ ದೊಡ್ಡ ಆಣ್ಣ, ಅಮ್ಮ ಮತ್ತು ಪಟಾಕಿಗೊಸ್ಕರನೇ ನಿಂತಂತಿರುವ ಅಣ್ಣನ ಮಕ್ಕಳು, ಅಕಾಶದೆತ್ತರಕ್ಕೆ ಬೆಳೆದಿರುವ ಮಳೆಗಾಲದ ಬೆಂಡೆಕಾಯಿ ಗಿಡ, ಎಲ್ಲವನ್ನ ನೆನಪಿಸಲು ನಿಶೆಯನ್ನ ದೂರಗೊಳಿಸಿದ ದಿವ್ಯ ಜ್ಯೊತಿ.. ಎಷ್ಟೊಂದು ವಿಚಾರಗಳು ಇದರೊಳಗೆ!

Tuesday, November 13, 2007

myHarate:"ನಮ್ಮ ಧ್ವನಿ"



ಅಂಬಾಗಿಲು - ಕಲ್ಸಂಕ ರಸ್ತೆಯ ಅಗಲೀಕರಣ ನೆಪದಲ್ಲಿ ಕಳೆದ 2-3 ವಾರಗಳಿಂದ ನಡೆಯುತ್ತಿರುವ ಮರಗಳ ಮಾರಣಹೋಮ ಮುಂದುವರಿದಿದೆ. ಪೊಲೀಸ್ ಬಿಗಿ ಬಂದೊಬಸ್ತ್-ನಲ್ಲಿ ನಡೆಯುತ್ತಿರುವ ಈ ಕಾರ್ಯ ಅಬಿವ್ರದ್ದಿ ನೆಪದಲ್ಲಿ ಅನಿವಾರ್ಯವಾದರೂ ಒಂದಿಶ್ಟು ವಿಮರ್ಶೆ ಇಲ್ಲಿ ಅಗತ್ಯವಾಗಿದೆ. ಅದೆಷ್ಟೊ ವಸಂತಗಳನ್ನ ಕಂಡು ಬದುಕುತ್ತ್ತಿದ್ದ ಮರಗಳನ್ನು ಧರೆಗುರುಳಿಸಿ ಅಗಲೀಕರಣ ಕಾರ್ಯ ಪ್ರರಂಭಮಾಡಿಯಾಗಿದೆ. ಎಷ್ಟೊ ಮನೆಗಳು, ಅಂಗಡಿಗಳನ್ನು ಸ್ತಳಾಂತರಿಸಲಾಗಿದೆ, ಆದರೆ ಕಡಿದ ಮರಗಳನ್ನು ಸ್ತಳಾಂತರಿಸುವವರಾರು? ರಸ್ತೆ ಪಕ್ಕದ ಸ್ತಳಗಲಿಗೆ ಪರಿಹಾರ ದೊರಕಿಸಿ ಆಗಿದೆ. ಅದರೆ ಮೂಕ ಮರಗಳ ಬದುಕು ಮೊಟಕುಗೊಳಿಸಿ ಸಮಸ್ಯೆ ಬಗೆಹರಿಸಲಾಗಿದೆ. ಮರಗಳಿಗೆ ಪರಿಹಾರವಾಗಿ ಮರಣವನ್ನು ಕರುಣಿಸಲಾಗಿದೆ. ಎಲ್ಲ ಸರಿ.. ಅದರೆ, ಈ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯಲು ನಾವಿನ್ನು ಅದೆಸ್ಟು ವಸಂತಗಳನ್ನ ಕಾಣಬೆಕೋ ಆ ದೇವರೆ ಬಲ್ಲ! ಪರಿಸರಪ್ರೇಮಿಯಾಗಿ ನನ್ನ ಕಳಕಳಿಯ ವಿನಂತಿ ಎನೆಂದರೆ ಸಂಬಂದಪಟ್ಟ ಅದಿಕಾರಿಗಳು ಇದರತ್ತ ಗಮನ ಹರಿಸಬೆಕು ಎಂಬುದಶ್ಟೆ. ಪರಿಸರ ವಿರೊಧಿ ಚಟುವಟಿಕೆಗಳನ್ನ ಬೀದಿಗೆಳೆಯಬೆಕಾದುದು ನಮ್ಮಲ್ಲರ ಕರ್ತವ್ಯ. ಏನೆ ಇರಲಿ, ಮರಗಳ ಸಾವಿನ ವರ್ಷಂತ್ಯದಲ್ಲಿ ಕಾಮಗಾರಿ ಮುಗಿಯಲಿ ಎಂಬುದು ಮುಂದಿನ ಹಾರೈಕೆ!

Tuesday, November 6, 2007

myKavana:"ಮಿನಿ-ಕವನ"

ಆಕೆಗೆ ಕೇ(ಹೇ)ಳಿದ್ದು..

ನಿನ್ನ ಕಂಡ ಕ್ಷಣ
ಮನ ತುಂಬಿ ದಿನಾ
ನುಗುವಿನಾ ಸಿಂಚನ...
ನಿನ್ನ ಹೆಸರ ಕೂಗೆ
ಇಂದು ಯಾಕೆ ಕಣೆ
ಎದೆ ತುಂಬಾ ಕಂಪನ?

ನೀನಲ್ಲವೆ?

ಮಳೆಯ ಹನಿಯ ತಂಪು
ಮಣ್ಣ ಕಣದ ಕಂಪು
ನನ್ನ ಕವಿತೆ ಇಂಪು
ನೀನಲ್ಲವೆ?

ರಾತ್ರೆ ಚಂದ್ರ ತಂಪು
ಮಲ್ಲೆ ಮಂಚ ಕಂಪು
ಸರಸ ಗಾನ ಇಂಪು
ನೀನಲ್ಲವೆ?

myKavana: "ನನಗೇನೆ?"

ನಿನ್ನ ಮುಡಿ ಮಲ್ಲಿಗೆಯ
ಮೊಗ್ಗೊಂದು ಅರಳಿಹುದು
ಕಂಪಸೂಸಿದೆ ಇಂದು
ಅಲ್ವೇ ಆ ಕಂಪು ನನಗೇನೆ?

ನಿನ್ನ ಕಾಲ್-ಗೆಜ್ಜೆಯ
ಮಣಿಯೊಂದು ಕರೆದಿಹುದು
ನನ್ನ ಗಮನವ ಅತ್ತ
ಅಲ್ವೇ ಆ ಕರೆಯು ನನಗೇನೆ?

ನಿನ್ನ ಮೊಗ ಬಾಂದಳದ
ಕಡುಗಪ್ಪು ಕಾಡಿಗೆಯು
ಮುಗಿಲ ತೆರನದಿ ನವಿಲ ಬರಸೆಳೆದಿದೆ
ಅಲ್ವೇ ಆ ಸೆಳವು ನನಗೇನೆ?

ನಿನ್ನ ಕೈ ಎರಡೆರಡು
ಒಂದಮೇಲೊಂದಿಟ್ಟು
ನನ್ನ ಸಂಬಳ ಪಡೆಯೆ ಹಾತೊರೆದಿದೆ
ಅಲ್ವೇ ಆ ಮೊರೆಯು ನನಗೇನೆ?!!

Saturday, November 3, 2007

myHarate:"ಹೀಗೊಂದು ಹರಟೆ"

ಮೊನ್ನೆ ಮೊನ್ನೆ ಜಯಂತ ಕಾಯ್ಕಿಣಿ ಅವರ ಮಾತ ಕೇಳೊ ಭಾಗ್ಯ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮ ಒದಗಿಸಿ ಕೊಟ್ಟಿತ್ತು.. ಹೀಗೆ SPB ಅವರು ಮಾತಾಡ್ತಾ ಇರ್ಬೆಕಾದ್ರೆ, ಮನೊಮೂರ್ತಿ ಅವರ ಸಂಗೀತ ಯಾಕೆ ಅಷ್ಟು ಜನಪ್ರಿಯ ಆಗುತ್ತಿದೆ ಅಂತ ಒಂದು ಪ್ರಶ್ನೆ ಮೂಡಿಬಂತು. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವ ಅದ್ರಲ್ಲು ಹೆಚ್ಚಾಗಿ ಮಕ್ಕಳು ಮೆಚ್ಚುವ ಅವರ ಸಂಗೀತ ನಿರ್ದೆಶನದ ಗುಟ್ಟೇನು ಅಂತ ವಿಚಾರಿಸುತ್ತಿರ್ಬೆಕಾದರೆ ಒಂದು ಕಟು ಸತ್ಯವನ್ನ ಕಾಯ್ಕಿಣಿಯವರು ನುಡಿದೆ ಬಿಟ್ಟರು!

ನಮಗೆ ಕೊಳಲು ತುಂಬಾ ಇಷ್ಟ ಆಗುತ್ತೆ, ನಾವು violine ತುಂಬಾ ಇಷ್ಟ ಪಡುತ್ತೇವೆ, ಯಾಕೆಂದರೆ ಆ ಸಂಗೀತದಲ್ಲಿ ತುಂಬಾ ಖಾಲಿ ಜಾಗ ಇರುತ್ತೆ, ನಮ್ಮ ಭಾವನೆಗಳನ್ನ ತುಂಬಲು ಬೆಕಾದಷ್ಟು ಜಾಗ ಇರುತ್ತೆ. ಕೊಳಲು ನುಡಿಸುವಾಗ ಪದಗಳನ್ನು ಹೆಣೆದು ನಮಗೂ ಹಾಡಬೇಕೆನಿಸುತ್ತದೆ. ರಾಗ ಇಷ್ಟ ಆಗಿ, ನಾವು ಹಾಡನ್ನ ಕೆಳುವಾಗ ಭಾವ ತುಂಬಿ ಪರಿಪೂರ್ಣಗೊಳಿಸುತ್ತೇವೆ.. ಎಷ್ಟು ನಿಜ, ಜೊರಾದ Rock ಸಂಗೀತದಿಂದ ಮೆಲ್ಲಗೆ ಆಚೆಮನೆಯಲ್ಲಿ ಕೇಳುವ karaoke music ಎಷ್ಟು ಚೆನ್ನಾಗಿ ಕೆಲ್ಸುತ್ತೆ ಅಲ್ವೆ/ನೇ? ಯಾಕೆಂದ್ರೆ ನಾವೆ ಅಲ್ಲಿ ಪದಗಳನ್ನ ತುಂಬಿ ಪದ್ಯಾನ ಪರಿಪೂರ್ಣಗೊಳಿಸುತ್ತೇವೆ... ಎಂತ ವಿಮರ್ಶೆ ಕಣ್ರೀ, ನಮಗೆ ಪದ್ಯ ಬರೆಯಲೇ ಬರಲ್ಲ, ಬಂದ್ರೂ ಅದಕ್ಕೆ ಮನೊಮೂರ್ತಿ ಸಂಗೀತ ನಿರ್ದೆಶಿಸಿದ್ರೂ ಅವರ ಸಂಗೀತ ಯಾಕೆ ಎಲ್ರಿಗೆ ಇಷ್ಟ ಆಗುತ್ತೆ ಅಂತ ಪ್ರಶ್ನೆನೇ ಬರಲ್ಲ, ಒಂದು ವೇಳೆ ಬಂದ್ರೂ ಅದಕ್ಕೆ ತಲೆ ಕೆರೆದ್ರೂ ಇಂತಹ ಉತ್ತರ ಸಿಗೊದೆ ಇಲ್ಲ ಬಿಡಿ, ಸಿಕ್ರೆ, ನಾವು ಅದೆ ಉತ್ತರಕ್ಕೆ ಕಾಯುತ್ತಿದ್ದೆವೆ ಅಂತ ಅನಿಸುತ್ತೆ! ಹೀಗಾಗೊದು, ಅವರ ವಿಮರ್ಶೆ ನಾವು ಒಪ್ಪಿಕೊಂಡ್ರೆ ಮಾತ್ರ.. ಕಾಯ್ಕಿಣಿ ಅಸಾಮನ್ಯ ಚಿಂತನಾಕಾರ ಎಂಬುದು ಸರ್ವಸತ್ಯ!

Thursday, November 1, 2007

mySTD:"Strange but true - Age is just a number!"

Hum..

When I was a kid, I was wished on my B'day as "Many many many happy returns of the day"
And now it is "Many many happy returns of the day!"
One day it might be that "Many returns of the day."
Day might come when people say "Will the day return?"
And so true that day will never return once!

Day keeps rolling and Night always comes.. But good that we are still surviving after the sleep.[Unlike few flowers!] So true that we are all part of it and none is excused!

Life is to do something before every night arrives and darkness blows! Age is just one more number and that keeps rolling till it finds incremental energy in life!

Have a good day ahead!

Regards,
Shanmukh.

Wednesday, October 31, 2007

ನನ್ನ-ಹರಟೆ:"ಕನ್ನಡ"

"ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಎದೆ ನಿಮಿರುವುದು"
ಕನ್ನಡವಿರೆ ಈ ಪದಗಳು ಬರುವವು
ಕನ್ನಡವಿರೆ ಈ ಕವನಗಳು!

ಕನ್ನಡದಲಿ ನೀವುಲಿಯುವ ಮಾತಲಿ
ಕನ್ನಡ ಹುಡುಕಲು ಮರೆಯದಿರಿ!
ಬೆಳೆಯಲಿ ಕನ್ನಡ ಅನುದಿನವು...
ಬಾರದೆ ಮುದಿತನ ನಮ್ ತರವು!

ಕನ್ನಡ ಕನ್ನಡ ಎನ್ನಡ ಅಂದರೆ
ತೊರಿಸಿ ಕೈಯಲ್ಲಿ ಎಕ್ಕಡವ!
ಬಾರಿಸಿ ಕನ್ನಡ ಡಿಂಡಿಮವ
ಓ ಕರ್ನಾಟಕ ಜನಗಳಿರಾ...

ಕನ್ನಡ ಮರೆತರೆ ಮರೆ ನೀ ಎನ್ನನು!

"ಸಿರಿಗನ್ನಡಂ ಗೆಲ್ಗೆ"

ಕನ್ನಡ ರಾಜ್ಯೋತ್ಸವದ ಶುಭಾಷಯಗಳು...

Monday, October 1, 2007

myPOD:"ಪರಾಗ"

myHarate:"Design principles"

modularity ಅಂತ ಹಗಲಿರುಳು ತಲೆಕೆರ್ಕೊಂಡು Design ಮಾಡೊ ನಮ್ಮಂತ Software Engineers ಮನುಶ್ಯ ಎಂಬ amazing system ಅನ್ನ ಸ್ರುಷ್ಟಿಸಿದ ಸ್ರಿಷ್ಟಿಕರ್ತನನ್ನ ನೆನೆಸಿಕೊಳ್ಳೋದು ಅಗತ್ಯ. High cohesion , less coupling ಅಂತ design rule ಅನ್ನ ಎಲ್ಲೊ ಬರ್ದಿಟ್ಟು ಶುರು ಹಚ್ಚಿರೊ design, ಆ system, ಎಲ್ಲೊ ಅಂತ್ಯ ಆಗಿರುತ್ತೆ.

ಎಷ್ಟೊ ಜನ ಕಿವುಡರಿರುತ್ತಾರೆ. ಅವರ audio system work ಆಗೊದೇ ಇಲ್ಲ. ಅದ್ರೂ ಅವರು ಜಗವನ್ನ ಚೆನ್ನಾಗೆ ನೋಡಬಲ್ಲರು. ಎಷ್ಟೊ ಜನ ಅಂಧರಿರುತ್ತಾರೆ, ಅವರ UI module worke ಅಗಲ್ಲ, still ಅವರು ಜಗತ್ತನ್ನ ಕೆಳಬಲ್ಲರು. ಎಷ್ಟೊ ಜನ ಮಾತಾಡದೆ ತಮ್ಮ ಕೆಲಸವನ್ನ ಚೆನ್ನಾಗೆ ಮಾಡ್ತಾರೆ. ಕೆಲವರು ಕಣ್ಣಿದ್ದೂ ಕಣ್ಣಿಲ್ಲದವರಗಿರುತ್ತಾರೆ, ಕೆಲವರು ಕಿವಿಯಿದ್ದು ಇನ್ನೊಬ್ಬ ಅನ್ನೊದನ್ನ ಕೆಳೊದೆ ಇಲ್ಲ, still entire system works perfectly! ಎಲ್ಲಯ್ಯ ನಮ್ಮ design? audio initialization fail ಅದ್ರೆ software ಗೋತ! Video initialization (ಹುಟ್ಟಿನಿಂದ್ಲೆ ಇಲ್ಲದಿದ್ರೆ) fail ಅದ್ರೆ system ಗೋತ! ಎಲ್ಲದರೊನ್ದು ಕಡೆ fail ಅದ್ರೆ (accidentally!) ಅಲ್ಲೂ ಗೋತ! ಎಲ್ಲಯ್ಯ ನಮ್ಮ fault tolerance code?

ಕಣ್ಣು ಮೂಗು ಬಾಯಿ ಕಿವಿ ಎನೂ ಉಪಯೊಗಿಸದೆ ಚೆನ್ನಗಿ ಕೆಲ್ಸ ಮಾಡೊರನ್ನ ಕಂಡಾಗ ನಂಗೆ Unix Terminal Commands ನೆನಪಿಗೆ ಬರುತ್ತವೆ. ತನ್ನಸ್ಟಕ್ಕೆ ಕೆಲ್ಸಾನ correct ಆಗಿ ಮಾಡುತ್ತೆ!

ಹೆಲ್ಲೊ designers, ಒಂದ್ಸಲಾ ಈ ಮನುಶ್ಯ ಅನ್ನೊ system ಅನ್ನ ಚೆನ್ನಾಗಿ ತಿಳ್ಕೊಳ್ಳಿ ಮಾರಾಯ್ರೆ!
How modular and how stable it is! after all God is Great!

Friday, September 21, 2007

myKavana:"ಈ ಸಂಜೆ ಯಾಕಾಗಿದೆ?"

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಓ ಚಂದಿರಾ
ಈ ಸಂಜೆ ಯಾಕಾಗಿದೆ
ಬದುಕೆಲ್ಲ ನಿಶೆ ತುಂಬಿದೆ ನೀನಿಲ್ಲದೆ
ಬೆಳದಿಂಗಳೇ
ಬದುಕೆಲ್ಲ ನಿಶೆ ತುಂಬಿದೆ:-(

ಈ ಬ್ಲಾಗು ಯಾಕಾಗಿದೆ ನೀವಿಲ್ಲದೆ
ಓ ಗೆಳೆಯರೇ
ಈ ಬ್ಲಾಗು ಯಾಕಾಗಿದೆ
ಬ್ಲಾಗೆಲ್ಲ ನಿಶೆ ತುಂಬಿದೆ ನೀವಿಲ್ಲದೆ
ಓ ಸಹ್ರುದಯರೇ
ಬ್ಲಾಗೆಲ್ಲ ನಿಶೆ ತುಂಬಿದೆ:-(

Sunday, September 2, 2007

myKavana:"ಮನಸನು ನೋಯಿಸಿದೆ"

ಯಾಕೆ ಪ್ರೀತಿಯ ಚಿವುಟಿರುವೆ
ಯಾಕೆ ಸ್ನೇಹವ ಕಳಚಿರುವೆ
ನಿನ್ನ ವಚನ, ಆ ತೀರ್ಮಾನ
ಎಲ್ಲವ ಮರೆಯಿಸಿದೆ,
ಇಂದು ಮನಸನು ನೋಯಿಸಿದೆ

ಒ ಹುಡುಗಿ, ಒ ಬೆಡಗಿ..
ನೀ ಎಂತ ಸ್ನೇಹಿ ಕಣೆ..
ನಿನ್ನ ಚಿಂತೆ, ನಿನ್ನ ಮಾತೆ
ಯಾತಕೆ ನೆನಪಾಗಿದೆ!

ಜೀವಿತದಿ ನಿದ್ರಿಸಲಾರೆ
ಯಾರಿಗೂ ನಾ ಸಿಗಲಾರೆ
ನಿನಗಷ್ಟೂ ನೆನಪಿದ್ದರೆ
ಯಾಕೆ ನಿನ್ನವರನ್ನೆ ಮರೆತೆ?

ಜನುಮ ಜನುಮದ ಈ ಸ್ನೇಹ
ಸೂರ್ಯ ಚಂದ್ರರಿಗೇತಕೆ?
ನಿನ್ನ ವಚನ, ಆ ತೀರ್ಮಾನ
ಎಲ್ಲವ ಮರೆಯಿಸಿದೆ,
ಇಂದು ಮನಸನು ನೋಯಿಸಿದೆ

Monday, August 20, 2007

myKavana:"Is pyaar ko mai kyaa naam doon?"

"ಮುಝೆ ಕುಚ್ ಕೆಹ್ನಾ ಹೈ" ಯ ಸುಮಧುರ ಟ್ರಾಕ್ ಕನ್ನಡದಲ್ಲಿ! ಲಾಯಕ್ ಆಗದಿದ್ದಲ್ಲಿ ಕ್ಷಮೆಯಿರಲಿ!

ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!
ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!

ಈ ಪ್ರೀತಿಯ ನಾ ಏನೆನ್ನಲಿ?
ಒಲವಿನ ಹ್ರುದಯವ ಹೇಗೆ ಸಂತೈಸಲಿ!

ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!
ರಬ್ಬಾ ಎನ್ನ ರಬ್ಬ ರಬ್ಬಾ
ರಬ್ಬಾ ಎನ್ನ ರಬ್ಬ!

ನಾ ಹಗಲಿರುಳು ಎಂದು ನಿನ್ನಯ ಪ್ರೀತಿಲಿ ಬದುಕಿರುವೆ
ನಿನ್ನೆದೆ ಮಿಡಿತವು ಇಂದು ಪ್ರೀತಿಯ ಹಾಡನೆ ಹೇಳುತಿದೆ
ನಮ್ಮಯ ಪ್ರೀತಿಯು ಅಮರ ಎಂದೆಂದಿಗೂ!
ಒಲವಿನ ಹ್ರುದಯವು ಮದುರ ಕೊನೆತನಕವೂ!

ಈ ಪ್ರೀತಿಯ ನಾ ಎನೆನ್ನಲಿ?
ಒಲವಿನ ಹ್ರುದಯವ ಹೇಗೆ ಸಂತೈಸಲಿ!

Sunday, August 19, 2007

myPOD:"ಕೂಡು-ಕುಟುಂಬ"

myKavana:"ಪ್ರೀತಿಯಲ್ಲಿ..."

ಇಲ್ಲಿ ನೀರಿದೆ ಬೆಳಕಿದೆ ತಿನ್ನಲು ಕಾಳಿದೆ ಉಸಿರಲಿ ನಲ್ಮೆಯಿದೆ...
ಹಸಿರಿನ ತೋಟದಿ ಬೀಸಲು ತುಂಬಾ ತಂಪನೆ ಗಾಳಿಯಿದೆ..

ಆದರು ನನ್ನ ನಯನವು ಮಾತ್ರ
ನಿನ್ನನೆ ಹುಡುಕುತಿದೆ..

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

ನಿನ್ನ ಇಹವನು ಹುಡುಕಿ ಜೊತೆಯಲಿ ಬಾಳಲು
ಜನ್ಮವ ನಾ ಪಡೆದೆ
ಅನ್ಯರ ಮರೆತು ನಿನ್ನನು ಸೇರುವ
ಸ್ವಾರ್ಥವು ನನ್ನಲಿದೆ..

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

ಮನದಲಿ ಮೂಡಿದೆ ನಿನ್ನದೆ ಕನಸು
ಎದೆಯಲಿ ನೋವಿಹುದು
ನೋವಲು ಏನೊ ನೆನಪುಗಳೆಂಬ
ಸಂತಸ ಸುಖವಿಹುದು

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

ಪ್ರೀತಿಯು ಸಹಿಸದು ಸುಳ್ಳನು ಎಂದಿಗೂ
ಇದ ನೀ ಮರೆಯದಿರು..
ಹ್ರುದಯವು ಒಡೆದರೆ ಕೂಡದು ಮತ್ತೆ
ನೋವಲಿ ಮುಂದೆಂದೂ!

ನೀ ಇರದಿರೆ ನಾನು ಹೇಗೆ ಬಾಳಲಿ?
ನಿನ್ನ ನೊಡುವ ಆಸೆ ಒಮ್ಮೆ ಬಾಳಲಿ.

Monday, August 13, 2007

myHarate:"ಹುಡು-ಕಾಟ"

weekend ನಲ್ಲಿ ನನ್ನ ಗೆಳೆಯನೊಬ್ಬನ ಮುಖ್ಯ ಕೆಲಸ ಇಸ್ಪೀಟ್ ಎಲೆ ಕಲಸುವುದು! ನಾನು ಈ 52 cardgaLa ಬಗ್ಗೆ ಮತಾಡುತ್ತಿಲ್ಲ.. ಅವನಿಗೆ ಬಂದ ಕುಂಡಲಿ ಅಥವಾ ಜಾತಕದ ಬಗ್ಗೆ ಹೇಳುತಿದ್ದೆನೆ ಅಷ್ಟೆ. ಸಮಸ್ಯೆ ಎಂದರೆ, ಮೊದಲು ಎಲ್ಲರಿಗು ಕಾಣುವುದು ಜೊಕರ್! ಮತ್ತೆ ಇರೊ ನಾಲ್ಕು ರಾಣಿಯರಲ್ಲಿ ಯಾವ color ಬೇಕು ಅಂತ ಬೇರೆ ಚಿಂತೆ.ಕೆಲವು ಎಕ್ಕನಷ್ಟು ಉದ್ದ.. ಹುಹ್.. ಅದು ದೊಡ್ಡ ಕೆಲಸವೆ ಸರಿ. ಆಡೊ ಕಳದಲ್ಲಿ ಆತನ ತಾಯಿ ತಂದೆ ಎಲ್ಲ ಇರುತ್ತಾರೆ. ಜೊಕರ್ ಕಂಡಕೂಡಲೆ ಅಮ್ಮನಿಗೆ ಭಾರಿ ಕುಶಿ, ಮಗ, ನಿನ್ಗೆ ಇದೆ ಬೆಸ್ಟ್ ಕಾಣ ಅಂತ. ಮಗನಿಗೆ ಎಳ್ಳಷ್ಟೂ ಇಷ್ಟ ಇಲ್ಲ. ಆಮ್ಮ, ಒಮ್ಮೆ ಮದ್ವೆ ಆದ್ರೆ ಜೀವನ ಪೂರ್ತಿ ಅವಳೊಟ್ಟಿಗೆ ಇರಬೇಕಲ್ವ(ಹುಡುಗನಿಗೆ ಎಲೆ ಮತ್ತೆ ಕಲಸಬೇಕೆಂಬ ಹಂಬಲ) ಎಂಬ ಸೆಂಟಿಮೆಂಟ್ ತಂದು ತಾಯಿನ ಸಮಧಾನ ಪಡಿಸ್ತಾನೆ. ತಾಯಿಗೆ ಗತಕಾಲದ flashback ನೆನಪಾಗಿ, ತಾನು ನೊಡಿದ ಮೊದಲ ಹುಡುಗನ ದಿಟ್ಟತನದಿಂದ ತಿರಸ್ಕರಿಸಿದ್ದು ನೆನಪಾಗಿ ಅಯ್ತು ಮಗ, ನಿಂಗೆ ಬೇಡ ಇದು ಅಂತಾಳೆ. ಹಮ್, ಜೊಕರ್ ಬೆರೆ ಕೈಗೆ ಪಾಸ್ ಮಾಡಿ ಅಯ್ತು. next ಕರಿ ರಾಣಿ ಬಂದಿದ್ದಾಳೆ, ಹುಡುಗನಿಗೆ ನೋಡಿ ಕುಶಿ ಆಗಿದೆ, ಆದರೆ ಅವನ ಅಪ್ಪನಿಗೆ ಕುಶಿ ಇಲ್ಲ. ಚಂದದ ಹುಡುಗಿ ತನ್ನ flashback ನಲ್ಲಿ ನೊಡಿದ ಸಹಸ್ರಾರು ಹುಡುಗಿಯರ ಅಪ್ಪನ experiment ನಲ್ಲಿ reject ಆಗಬೇಕೆ! ಹುಡುಗ ಆಡೊದನ್ನೆ ನಿಲ್ಲಿಸೊ ತೀರ್ಮನ ತೆಗೆದುಕೊಳ್ಳೊ ಆಲೊಚನೆ ಮಾಡುತ್ತಿರುವಾಗಲೆ ಅಪ್ಪನ ಕೈಯಲ್ಲಿ ಕೆಂಪಾದ ಆಟೀನು ರಾಣಿ ಕಂಡಿತು. ಅಪ್ಪ ಮಗ ಸಂತೊಷದಲ್ಲಿ ನಗುತ್ತಿರಬೇಕಿರೆ, ಭಾವಿ ಅತ್ತೆ alias ಅಮ್ಮನದು ಒಂದೆ ರಾಗ, ಅದರ ನವಗೆ ಹೇಳಿದಾಂಗೆ ಕೆಳಿಸಲೆ ಸಾದ್ಯ ಇಲ್ಲೆ, ಆಟೀನು ರಾಣಿಯ ತುಟಿ ನೊಡು, ಹುಹ್. ನವಗೆ ಇದು ಆಗ್ಲಿಕಿಲ್ಲ ಎಂಬ ಒಂದೆ ನುಡಿ. ಮಗನ ಒಂದು ಸೆಂಟಿಮೆಂಟು ಮತ್ತೆ, ಹೀಗೆ ಹುಡುಕಿಕೊಂಡು ಇದ್ದರೆ, ನಾನು ಮದೆವೆಯೆ ಆಗೊದಿಲ್ಲ ಅಂತಾನೆ, ನಾಳೆ ಹುಟ್ಟೊ ಪಿಳ್ಳೆ ನೊಡಬೇಕೆಂಬ ಹಂಬಲ ಅಮ್ಮಂದು, ಕೊನೆಗೆ ಅಮ್ಮನ ಒಪ್ಪಿಗೆ ಕೂಡಾ ಸಿಗುತ್ತದೆ.. ಇಷ್ಟೆಲ್ಲ ಆಗಿ ಉಪ್ಪಿಟ್ಟು ಅವಲಕ್ಕಿ ತಿನ್ನಲು ಆಟೀನು ರಾಣಿ ಮನೆಗೆ ಹೊಗುವಾಗ ಆಕೆಗೆ ಆತನ ಮೇಲೆ ತಿರಸ್ಕಾರ!

ಮದ್ವೆ ಆಗೋದು ಮನೆಕಟ್ಟಿದ ಹಾಗೆ, ಅಷ್ಟು ಸುಲಭ ಅಲ್ಲ ಅಲ್ವೆ?

card pack change ಆಗಿದೆ, ಆಟೀನು ರಾಣಿಗೆ ಹುಡುಕಾಟ ನಡೆಯುತ್ತಲೆ ಇದೆ! ನಿಮಗೆ ಸಿಕ್ಕರೆ ದಯವಿಟ್ಟು ತಿಳಿಸಿ!

Saturday, August 11, 2007

myHarate:"ಸ್ವಾತಂತ್ರ್ಯ ಸಂಗ್ರಾಮ"

ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ ನೊಡಿ, ನಮ್ಮ bowlergaLu ಕೂಡ ಆಂಗ್ಲರನ್ನು ಬಗ್ಗುಬಡಿದಿದ್ದ್ಡಾರೆ! ಅಂತಹ bowling ಆಂಗ್ಲರದ್ದು! ಈ ಸಲ ಅಂತೂ ಕ್ರಿಕೆಟ್ ಪ್ರೆಮಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಮೆರುಗೇ ಬಂದುಬಿಟ್ಟಿದೆ. ಬಹಳ ದಿನಗಳ ಮತ್ತೆ Indiannaru ಮೈಕೊಡವಿ ನಿಂತಿದ್ದಾರೆ. batting, bowling ಯಾವುದರಲ್ಲೂ ಅಂಜದೆ ಅಡ್ಡುತ್ತಿದ್ದಾರೆ. ಓವಲ್ ಟೆಸ್ಟ್ ಸೊಲೊ ಮಾತೆ ಇಲ್ಲ, So ನಾವು ಸರಣಿ ಗೆದ್ಡಂತೆ! Hats-off to team India!

Thursday, August 9, 2007

myKavana:"ತುಂಟ-ಮಳೆ ಮತ್ತು ಆಕೆ!"

ಹೋಗುತ್ತಿದ್ದೆ ತುಸು ಸಾರೀನ ಮೇಲೆ ಕಟ್ಟಿ ಮನೆ
ಬರಬೇಕೆ ತುಂಟ-ಮಳೆ ಇಲ್ಲದಂತೆ ಕೊನೆ!
ತಲೆ ಮೇಲೆ ನೀರೆ, ನೀರೆ ಮೈಮೇಲೆ,
ಬಂತಲ್ಲ ಚಳಿ ನೀರು ಕಾಲಿಂದ ಮೇಲೆ!

ತುಂಟ ಮಳೆ ಬರುವುದನು ದೇವರೆ ಬಲ್ಲ!
ಮೈಯ ಕೇಳಲೆ ಇಲ್ಲ, ಬಿಡಿ ಕಾಲಿಗೂ ಇಲ್ಲ!
ನುಡಿ ಬೇಕು ನಡೆ ಬೇಕು, ನುಡಿದಂತೆ ನಡೆಬೇಕು
ಕೇಸು courtige ಅಲೆಯೆ ಮಳೆ ಮುಗಿಯಬಹುದು!

Tuesday, July 31, 2007

myHarate:"ಕಾನೂನು ಯಾರನ್ನೂ ಬಿಡದು!"

ಕಾನೂನು ಯಾರನ್ನೂ ಬಿಡದು!

ಈಗತಾನೆ ಹುಟ್ಟಿದ ಮಗು ಕೂಡ ಕಾನುನಿನ ಚವ್ಕಟ್ಟಲ್ಲೆ ಇರಬೇಕು. ಅಂತದ್ರಲ್ಲಿ ನಮ ಸಂಜಯ್ ದತ್ ಹೇಗೆ ತಾನೆ ಹೊರಬಂದಾರು? ಸಂಜಯ್ನನ್ನ ಮನ್ನಿಸಿದರೆ ಅದು ನಮ್ಮ ಸಣ್ಣತನ ಅನ್ನಿಸದಿರದು, ಎಷ್ಟೆ ದೊಡ್ಡ ಹೆಸರುವಾಸಿ ವ್ಯಕ್ತಿ ಆದರೂ ತಪ್ಪು ಮಾಡಿದರೆ ಶಿಕ್ಷೆ ಬೇಕಲ್ಲವೆ?

ಹೌದು, 6 ವರ್ಷ ಸೆರೆವಾಸ ತುಂಬಾನೆ ಜೀರ್ಣಿಸಲಾರದ ತೀರ್ಪು, ಸಂಜಯ್ನನ್ನ ಇನ್ನು ಹೊಸ ಸಿನೆಮಾದಲ್ಲಿ ನೊಡಲುಂಟೊ ಇಲ್ಲವೊ? ತೀರ್ಪು ಬಂದ ತಕ್ಷಣ ನ್ಯಾಯಾಧೀಶನ ಕೈಕುಲುಕಿ thanks ಎಂದು ಅಲ್ಲಿಂದ ಜೈಲಿಗೆ ಕಾಲ್ಕಿತ್ತರು ಸಂಜಯ್.. ಆ ನ್ಯಾಯಾದೀಶ ಈವರೆಗೆ 13 ವರ್ಷದ ಬಾಳನ್ನು ಸಂಜಯ್ ಗೆ ಕೊಟ್ಟಿದ್ಡ ಎನ್ನೊದನ್ನ ಮರೆಯಬಾರದು.

ಹೌದು, ಸಿನೆಮ ಜೈಲಲ್ಲಿ ಕುಳಿತುಕೊಂಡು ಮಾಡಲಾಗದು. ನಮ್ಮ software ತಂತ್ರಜ್ನರೊ, ಒಳ್ಳೆದಾಯ್ತು ಬಿಡಿ, ಜೈಲಲ್ಲಿ code ಮಾಡೊದ್ರಲ್ಲು ಭಾರಿ ಮೊಜು ಇದೆ ಅನ್ನುತ್ತಿದ್ದರೆನೊ? ಅವರಿಗೆ ಜೈಲು ಶಿಕ್ಷೆ ಉದ್ಯೊಗ ಶಿಕ್ಷೆಗಿಂತ ವಾಸಿ ಅನಿಸುತ್ತಿತ್ತೊ ಎನೊ;-) ಅದರೆ ನಮ್ಮ ಸಂಜಯ್ ಗೆ ಅದೆಲ್ಲ ಅಸಾದ್ಯವಾಗಿ ಬಿಟ್ಟಿದೆ. ಮುನ್ನಭಾಯಿ ಅಮೆರಿಕ ಚಲೇ(part 3)ಲಿ ಸಂಜಯ್ ಬಿಟ್ಟು ಬೆರೆ ಯಾರು ತಾನೆ act ಮಾಡಲು ಸಾದ್ಯ? ಮುನ್ನಭಾಯಿ ಜೈಲ್ ಚಲೆ ಅಂತ change ಮಾಡಿ ಜೈಲಲ್ಲೆ ಶೂಟ್ ಮಡಿದ್ರೆ ಮತ್ತೆ ಸಂಜಯ್ ನೊಡಬಹುದೊ ಎನೊ?

ಇಷ್ಟೆಲ್ಲ ಇದ್ದರೂ, ಸುಪ್ರೀಮ್ courtalli ವಾದ ಇನ್ನೂ ನಡೆಯಬೇಕಿದೆ, ಅದಿನ್ನೊಂದು 20 ವರ್ಷ ನಡೆದರೆ, ಜೀವನ ಪೂರ್ತಿ ಸಂಜಯ್ ಸಿನಿಮ ಸೇವೆ ಖಂಡಿತಾ ಸಿಗುತ್ತದೆ!

ಅಂದ ಹಾಗೆ 3 ಜನರ ಹಂತಕನ ವಾದ ಸುಪ್ರೀಮ್ courtalli ಇತ್ಯರ್ತ ವಾಗಿದ್ಡು, ಹಂತಕನಿಗೆ 10 ವರ್ಷ ಕಠಿನ ಶಿಕ್ಷೆಯಾಗಿದೆ, ಆದರೆ 13 ವರ್ಶದ ಹಿಂದೆ ನಡೆದಿದ್ದರಿಂದ , ಆರೊಪಿ 13 ವರ್ಷ ಜೈಲಲ್ಲೆ ಕಳೆದುದರಿಂದ, ಅವನನ್ನು ಬಿಡುಗಡೆ ಗೊಳಿಸಲಾಗಿದೆ!

ಏನು ವಿಪರ್ಯಾಸ ನೊಡಿ..


ಕಳೆದ 13 ವರ್ಷದಲ್ಲಿ ಸಂಜಯ್ ಎಷ್ಟು ಒಳ್ಳೆಯವನಾಗಿ ಬಿಟ್ಟಿದ್ದಾನೊ ಏನೊ?
ಈಗ ಶಿಕ್ಷೆ ಕೊಟ್ಟರೆ ಆತನ ಒಳ್ಳೆತನಕ್ಕೆ ಶಿಕ್ಷೆ ಕೊಟ್ಟಂತಾದರೆ ನಾವು ನಮ್ಮ ಕಾನೂನನ್ನು ಕ್ಷಮಿಸಬೇಕಷ್ಟೆ!

Sunday, July 22, 2007

myPOD:"ಪ್ರತಿಫಲನ"

myHarate - "ಮುಜೇ ಭೀ ಏಕ್ ಚಾಹತ್ ಹೈ.."

ಮುಜೇ ಭೀ ಏಕ್ ಚಾಹತ್ ಹೈ..
ಮಗರ್ ಮೈ ಕಹಾ ನಹೀ ಸಕ್ತಾ..

ಜೀವನ ಎಂದರೆ ಎಷ್ಟು ಸುಂದರ , ಅಂದುಕೊಂಡದ್ದೆಲ್ಲ ಸರಿಯಾಗೆ ನಡೆದು ಹೋದರೆ!
ಜೀವನ ಎಷ್ತು ದೊಡ್ಡ ಹಂದರ, ಅಂದುಕೊಂಡದ್ದು ಒಂದೂ ನಡೆಯದಿದ್ದರೆ?

ಓ ತಾರೆ, ನೀನೆಂದು ಬೆಳಗುತಿರು.. ನನಗೆಟಕದಿದ್ದರೂ, ನಿನ್ನ ಬೆಳಕು ಕಣ್ಣ ಕುಕ್ಕಿದೆ. ಎಲ್ಲ ಮರೆತಾಗ ಮನ ಬೆಳಗಿದೆ..
ಓ ತಾರೆ ನೀ ಮರೆಯಾದರಿಂದು, ಮನಕೆ ಮೂಡಿಬರೆಯ ಮತ್ತೆ?

ಓ ತಾರೆ ಎಂತು ಕಾಂಬೆನು ನಂದ ನಂದನ ಮನದ ಬಯಲಲಿ ಎಂದಿಗೂ?
ಚಂದ್ರ ಇಲ್ಲದ ರಾತ್ರಿ ಎಲ್ಲವು ನನ್ನ ಪಾಲಿಗೆ ನೀನೇನ?
ಹಗಲ ವೇಷದಿ ಕನಸ ಹುಟ್ಟಿಸಿ ಮರೆವ ಲೋಕದಿ ಮೆರೆಯಲೆ?
ನಿನ್ನ ಸಿಹಿ ನೆನಪಲ್ಲಿ ಮರೆತಿದೆ ಬಾಳ ಬೇವಿನ ಕರಿಹೊಗೆ..

ಕಣ್ಣೆದುರು ಕುಣಿದಾಡಿ ಮಾತಾಡಿ,
ಆಟವಾಡಿ ಕೊನೆಗೊಮ್ಮೆ ಕಾಲು ಜಾರಿ
ಕೆರೆಯಲ್ಲಿ ಲೀನವಾಗಿಹೆಯಲ್ಲಾ ಗೆಳತಿ...

ಗೆಳತೀ... ನಾನೆಂದೂ ಕ್ಷಣಿಕ, ನೀಯೆಂದೂ ಅಮರ, ನಾವೆಂದೂ ಮಧುರ...

ಮುಜೇ ಭೀ ಏಕ್ ಚಾಹತ್ ಹೈ..
ಮಗರ್ ಮೈ ಕಹಾ ನಹೀ ಸಕ್ತಾ..

ಇಂತೀ ನಿನ್ನವ,
ಅನಾಮಿಕ!