Tuesday, March 22, 2011

myKavana:"ಮಾಮರ ಕೂಗು! - Part 2"

ರಸ್ತೆ ಅಗಲೀಕರಣ ನೆಪದಲ್ಲಿ ಸಂತೆಕಟ್ಟೆ ರಸ್ತೆ ಸುತ್ತ (NH-17: Udupi to kundaapura) ಸಾಲುಮರಗಳು ಉರುಳುತ್ತ ನೆನಪಿಸಿದ್ದು ಬರೀ ನೋವು. ಇದೇ ಈ 'ಮಾಮರ ಕೂಗು - part 2'. ಮಹಾಭಾರತದಲ್ಲಿ ವರ್ಣಿಸಿದ ಕುರುಕ್ಷೇತ್ರದ ಕೊನೆದಿನಕ್ಕಿಂತಲೂ ಈ ನೈಜ ದೃಶ್ಯ ಭಯಂಕರ:-(

ಕಂಪಿಸಿತು ಭೂಮಿಯಿಡಿ ಹಸಿಮರವ ಮುರಿಯಲು.
ಕೊಲೆಯಾಗಿ ಬಿದ್ದವು ಎಳೆಕಾಯಿ ಚಿಗುರುಗಳು.
ಮರೆಯಾಗಿರುವ ನಮ್ಮ ಮಾನವೀಯತೆಗೆ.
ಸತ್ತುಮಲಗಿದೆ ಸಾಲುಮರಗಳು ಜೊತೆಗೆ.

ಮರುಭೂಮಿಯಂತಿದೆ, ನೀರಿಲ್ಲದೂರಿನಲಿ.
ಮರವಿಲ್ಲ, ನೆರಳಿಲ್ಲ, ಮುಂದೆ ಮಳೆಯೂ ಎಲ್ಲಿ?
ಬೇಸಗೆಯ ಶಾಖ ಜೊತೆ ಧೂಳಿನೋಕುಳಿಯಿದೆ.
ನಿಲ್ಲದಿರೆ ಇದರಲ್ಲೆ ಮನುಕುಲದ ಅಳಿವಿದೆ.