Wednesday, December 16, 2009

myKavana:"ಉಡುಪಿಯಲ್ಲಿ..."

ಎಂದಾದರೊಂದು ದಿನ ನಾನು ಉಡುಪಿಗೆ ಹೊಗಿ
ರಥಬೀದಿಯನು ಅಲೆದು ನೋಡಬೇಕು
ಅಲ್ಲೆ ಎಲ್ಲಾದರು ರಸ್ತೆಪಕ್ಕದಿ ನಿಂತು ಚುರುಮುರಿಯ
ರುಚಿಯನ್ನು ಸವಿಯಬೇಕು

ಚುರುಮುರಿಯ ತಿನ್ನುತ್ತ ಬೀದಿ ಬೀದಿಯನಲೆದು
ಕೈಕಾಲುಗಳು ತುಂಬಾ ಸುಸ್ತಾಗಬೇಕು
ಅಲ್ಲಿರುವ ಎಳೆ ತಾಳೆ ಬೊಂಡ ಕೆತ್ತುತ್ತಲೇ
ಅದರ ಸವಿ ನಾಲಗೆಗೆ ತಿಳಿಯಬೇಕು.

ಒಮ್ಮೆ ಎಂದಾದರು ಬೆಂಗ್ರೆ ಪರಿಸರದಲ್ಲಿ
ಸಂಜೆಯಲಿ ನಾವೆಲ್ಲ ತಿರುಗಬೇಕು.
ನದಿ ಸೇರಿ ಸಾಗರವ ಸೃಷ್ಟಿಸಿಹ ಸ್ವರ್ಗದಲಿ
ತಂಪಾದ ಗಾಳಿ ಸದಾ ಸುಳಿಯಬೇಕು

ಮುಂದೆ ಎಂದಾದರು ಮಲ್ಲಿಗೆಯ ತೋಟದಲಿ
ಅರಳುವಾ ಪರಿಯನ್ನು ನೋಡಬೇಕು
ಕಂಪನ್ನು ಸವಿಯುತ್ತಾ ಮೂರು ಮೊಳ ಮಲ್ಲಿಗೆಯ
ನಲ್ಲೆ ಜಡೆ ತುಂಬಾ ಮುಡಿಸಬೇಕು

ಹೀಗೆ ಎಂದಾದರು ಮಲ್ಪೆ ಕಡಲಿನ ದಡದಿ
ನಾವೆಲ್ಲ ಒಂದು ದಿನ ಕೂಡಬೇಕು,
ಅಲ್ಲಿ ಮರಳಿನ ಮೇಲೆ ಕುಳಿತಿರಲು ತಂಪಾಗಿ
ಸೂರ್ಯದೇವರ ಅಸ್ತ ಕಾಣಬೇಕು

3 comments:

Anonymous said...

layakidhu...

naveen said...
This comment has been removed by the author.
Naveen said...

ಮುಂದೆ ಎಂದಾದರು ಮಲ್ಲಿಗೆಯ ತೋಟದಲಿ
ಅರಳುವಾ ಪರಿಯನ್ನು ನೋಡಬೇಕು
ಕಂಪನ್ನು ಸವಿಯುತ್ತಾ ಮೂರು ಮೊಳ ಮಲ್ಲಿಗೆಯ
ನಲ್ಲೆ ಜಡೆ ತುಂಬಾ ಮುಡಿಸಬೇಕು

edhu layaka aidhu :)