Tuesday, December 29, 2009

ಸಿ. ಅಶ್ವಥ್ ಇನ್ನಿಲ್ಲ:-(

ಸ್ವಂತಿಕೆಯ ಗಾಯಕ, 'ಕನ್ನಡವೇ ಸತ್ಯ'ವೆಂದ ಮಹಾನ್ ಚೇತನ, ಹಲವಾರು ಕವಿಗಳ ಪದಗಳಿಗೆ ಜೀವತುಂಬಿದ ಸಿ. ಅಶ್ವಥ್ ಇನ್ನಿಲ್ಲ.

ಗಿಳಿ(ಆತ್ಮ)ಯು ಪಂಜರ(ದೇಹ)ದೊಳಿಲ್ಲ,
ಎಲ್ಲಾ ಮಾಯ, ಇಲ್ಲಿ ನಾವೂ ಮಾಯ!
ಕೋಡಗನ ಕೋಳಿ ನುಂಗಿತ್ತಾ
ಮೈಸೂರು ಮಲ್ಲಿಗೆ, ಶ್ರಾವಣ ಹೀಗೆ ಸಾವಿರಾರು ಹಾಡನ್ನ ನಮಗಿತ್ತು ಮಾಯವಾಗಿದ್ದಾರೆ. ಕಾಣದ ದಾರಿ ತುಳಿದು ಇಹಲೋಕ ತ್ಯಜಿಸಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಕೋರೋಣ. ಮಾಯ ಎಂದ ತಕ್ಷಣ ಯಾವುದೋ ಗೀತೆಯ ಮೂಲಕ ಜೀವಂತವಾಗುತ್ತಾರೆ. ಅವರು ಚಿರಾಯು, ಇನ್ನಿಲ್ಲವಾದರೂ ಬದುಕುತ್ತಾರೆ. ಅವರ ಬದುಕಿನ ಕೆಲ ವರುಷ ನಾನೂ ಜೊತೆಯಲ್ಲಿ ಇದ್ದದ್ದಕ್ಕೆ ಧನ್ಯೋಸ್ಮಿ!

No comments: