Sunday, June 15, 2008

myHarate:"ಏನಂತೀರಿ?"

ಗಾಂಧೀಜಿ ಎನೋ ಹೀಗಂದರಂತೆ - ಪ್ರತೀ ಹಳ್ಳಿಯೂ ಒಂದು ಸಣ್ಣ ಭಾರತ, ಪ್ರತೀ ಗ್ರಾಮವನ್ನು ಉದ್ಧಾರ ಮಾಡೋಣ. ಆಗ ದೇಶ ಉದ್ಧಾರ ಆಗುತ್ತೆ ಅಂತ. ನಿಜ ಅರಿವು ಏನು ಎಂದರೆ, ಪ್ರತೀ ಮನೆಯು ಒಂದು ಸಣ್ಣ ಭಾರತ, ಮನೆ ಮನೆಯೂ ಉದ್ಧಾರ ಆದರೆ ದೇಶ ಉದ್ಧಾರ ಆದಂತೆಯೆ!

ಮನೆ ಮನೆಯಲು ನಿಮ್ಮದೇ ಸರ್ಕಾರ! ಕೆಲವೊಮ್ಮೆ ಬಹು ಸಚಿವ ಸ್ಥಾನವನ್ನು ಒಬ್ಬರೆ ತುಂಬ ಬೇಕಾಗಬಹುದು. ಪಂಚವಾರ್ಷಿಕ ಯೋಜನೆ, ವಾರ್ಷಿಕ ಬಜೆಟ್ ಮಂಡನೆ ಎಲ್ಲ ಇದ್ದೆ ಇರುತ್ತದೆ. ಬ್ಯಾಂಕ್ ವಹಿವಾಟು, ಸಾಲ ವಿಲೇವಾರಿ ಇದ್ದೆ ಇರುತ್ತದೆ! ಮನೆ ತುಂಬ ಪಕ್ಷಗಳಿದ್ದರೆ ಮನೆಯಲ್ಲು ಕುರ್ಚಿಗೆ ಗುದ್ದಾಟ ಇರುತ್ತದೆ! ಅಂದಹಾಗೆ, ಪ್ರತೀ ಮನೆ ಮುಂದುವರಿದರೆ ಭಾರತ ಮುಂದುವರಿದಂತೆ ಅಲ್ಲವೆ!

ಉಡುಪಿಯ ಸಮಸ್ಯೆ ಪರಿಹರಿಸಲು ಶಾಸಕರಾದ ರಘುಪತಿ ಭಟ್ ಅವರ ಮನೆಯಲ್ಲೆ ಸಮಸ್ಯೆ ಇತ್ತು ಎಂದು ತಿಳಿದು ಇದೆಲ್ಲ ನೆನಪಾಯ್ತು!

ನಮ್ಮ ಮನೆಯಲ್ಲಿ ನಿಮ್ಮೆಲ್ಲರಂತೆಯೆ ನಾನು ಒಂದು ಪ್ರಮುಖ ಸಚಿವ ಸ್ಥಾನ ತುಂಬಿದ್ದೇನೆ, ಸದ್ಯಕ್ಕೆ ಅದನ್ನ ಸರಿಯಾಗಿ ಕೆಲಸದ ಜತೆ ನಿರ್ವಹಿಸುತ್ತೇನೆ, ಮನೆ-ಮನೆಯಲ್ಲಿ ಮನ ಬೆಳಗಿದರೆ ಮುಂದೊಂದು ದಿನ ಭಾರತ ಬೆಳಗದಿರದು. ಏನಂತೀರಿ?

No comments: