Friday, September 9, 2011

myKavana:"ಪರಿಸರ ಕಾಳಜಿ"

ಹಣದ ವ್ಯಾಮೋಹದಲಿ
ಭೂಮಿ ಮೈ ಹರಿದೆವು
ಆಕಾಶದೆತ್ತರದಿ ಮನೆಯ
ಮಾಡಿದೆವು, ಮಾರಿದೆವು

ಎತ್ತರಕೆ ಹೋದಂತೆ
ಮಣ್ಣ ನಾವ್ ಮರೆತೆವು
ಹಸಿರಲಿ ಕೆಸರಾಡಿದೆವು
ಉಸಿರಿಗೆ ವಿಷ ಸೇರಿಸಿದೆವು.

ಹಕ್ಕಿ ಹಾರುವುದಿಲ್ಲ
ಕಪ್ಪೆ ಕೂಗುವುದಿಲ್ಲ
ನಾವಲ್ಲದಿನ್ನಾರು ಅಲ್ಲಿ
ಬದುಕುವುದೆ ಇಲ್ಲ.

ಗಣಿಯ ನಾಡಲಿ ಇಂದು
ಗುಡುಗುಗಳೆ ಇರವು.
ಮಳೆಯು ಬರುವುದು ಎಂತು?
ಬರೀ ಧೂಳಿರುವುದು!

No comments: