Friday, May 13, 2011
Tuesday, March 22, 2011
myKavana:"ಮಾಮರ ಕೂಗು! - Part 2"
ರಸ್ತೆ ಅಗಲೀಕರಣ ನೆಪದಲ್ಲಿ ಸಂತೆಕಟ್ಟೆ ರಸ್ತೆ ಸುತ್ತ (NH-17: Udupi to kundaapura) ಸಾಲುಮರಗಳು ಉರುಳುತ್ತ ನೆನಪಿಸಿದ್ದು ಬರೀ ನೋವು. ಇದೇ ಈ 'ಮಾಮರ ಕೂಗು - part 2'. ಮಹಾಭಾರತದಲ್ಲಿ ವರ್ಣಿಸಿದ ಕುರುಕ್ಷೇತ್ರದ ಕೊನೆದಿನಕ್ಕಿಂತಲೂ ಈ ನೈಜ ದೃಶ್ಯ ಭಯಂಕರ:-(
ಕಂಪಿಸಿತು ಭೂಮಿಯಿಡಿ ಹಸಿಮರವ ಮುರಿಯಲು.
ಕೊಲೆಯಾಗಿ ಬಿದ್ದವು ಎಳೆಕಾಯಿ ಚಿಗುರುಗಳು.
ಮರೆಯಾಗಿರುವ ನಮ್ಮ ಮಾನವೀಯತೆಗೆ.
ಸತ್ತುಮಲಗಿದೆ ಸಾಲುಮರಗಳು ಜೊತೆಗೆ.
ಮರುಭೂಮಿಯಂತಿದೆ, ನೀರಿಲ್ಲದೂರಿನಲಿ.
ಮರವಿಲ್ಲ, ನೆರಳಿಲ್ಲ, ಮುಂದೆ ಮಳೆಯೂ ಎಲ್ಲಿ?
ಬೇಸಗೆಯ ಶಾಖ ಜೊತೆ ಧೂಳಿನೋಕುಳಿಯಿದೆ.
ನಿಲ್ಲದಿರೆ ಇದರಲ್ಲೆ ಮನುಕುಲದ ಅಳಿವಿದೆ.
ಕಂಪಿಸಿತು ಭೂಮಿಯಿಡಿ ಹಸಿಮರವ ಮುರಿಯಲು.
ಕೊಲೆಯಾಗಿ ಬಿದ್ದವು ಎಳೆಕಾಯಿ ಚಿಗುರುಗಳು.
ಮರೆಯಾಗಿರುವ ನಮ್ಮ ಮಾನವೀಯತೆಗೆ.
ಸತ್ತುಮಲಗಿದೆ ಸಾಲುಮರಗಳು ಜೊತೆಗೆ.
ಮರುಭೂಮಿಯಂತಿದೆ, ನೀರಿಲ್ಲದೂರಿನಲಿ.
ಮರವಿಲ್ಲ, ನೆರಳಿಲ್ಲ, ಮುಂದೆ ಮಳೆಯೂ ಎಲ್ಲಿ?
ಬೇಸಗೆಯ ಶಾಖ ಜೊತೆ ಧೂಳಿನೋಕುಳಿಯಿದೆ.
ನಿಲ್ಲದಿರೆ ಇದರಲ್ಲೆ ಮನುಕುಲದ ಅಳಿವಿದೆ.
Tuesday, February 15, 2011
Wednesday, February 2, 2011
Tuesday, January 18, 2011
Thursday, January 6, 2011
myKavana:"ಮಾಮರ ಕೂಗು!"
ರಸ್ತೆ ಅಗಲೀಕರಣ ನೆಪದಲ್ಲಿ ಸಂತೆಕಟ್ಟೆ ರಸ್ತೆ ಸುತ್ತ ಹೂಬಿಟ್ಟ 'ಕಾಡು ಮಾವಿನಮರ' ಉರುಳುತ್ತ ನೆನಪಿಸಿದ್ದು ಬರೀ ನೋವು. ಇದೇ ಈ 'ಮಾಮರ ಕೂಗು'.
ನೂರಾರು ವರುಷದ ಕನಸಲ್ಲವೇನು
ನೋಡಬೇಕಿದೆ ನಾನೂ ಹೊಸ ರಸ್ತೆಯನ್ನು
ಸಂತಸದಿ ಚಳಿಯಲ್ಲಿ ಹೂಬಿಟ್ಟೆ ನಾನು
ಕೊಡಲಿ ಏಟೇಕೆ ಬರಿ ಸ್ವಾರ್ಥಿ ನೀನು!
ನಾನೀಗ ಹೂಬಿಟ್ಟೆ ನಿಮಗಾಗಿ ತಾನೆ!
ಜಾಗವನು ಬಿಡಬೇಕೆ ನಿಮ್ಮಾಜ್ಞೆ ಏನೆ?
ನನ್ನ ಸಂತತಿ ಇಲ್ಲಿ ಬರಲಾರರಿನ್ನು
ತಗೋ ನಿಮ್ಮ ಕುಲಕೆ ಈ ಹಿಡಿಶಾಪವನ್ನು!
ಸಹಿಸಿದೆ ಹಗಲಿರುಳ ವಾಹನದ ಅಬ್ಬರ
ಹಗಲಿನಲಿ ನೆರಳಾದೆ ಹಾಕಿ ಎಲೆ ಚಪ್ಪರ
ತಂಗಾಳಿ ಸಿಹಿಗಾಳಿ ಬೇಕೆ ನಿನಗೆ?
ನನ್ನಂತೆ ಮರಣವೆ ಕೊನೆಗೆ ನಿನಗೆ
ನೂರಾರು ವರುಷದ ಕನಸಲ್ಲವೇನು
ನೋಡಬೇಕಿದೆ ನಾನೂ ಹೊಸ ರಸ್ತೆಯನ್ನು
ಸಂತಸದಿ ಚಳಿಯಲ್ಲಿ ಹೂಬಿಟ್ಟೆ ನಾನು
ಕೊಡಲಿ ಏಟೇಕೆ ಬರಿ ಸ್ವಾರ್ಥಿ ನೀನು!
ನಾನೀಗ ಹೂಬಿಟ್ಟೆ ನಿಮಗಾಗಿ ತಾನೆ!
ಜಾಗವನು ಬಿಡಬೇಕೆ ನಿಮ್ಮಾಜ್ಞೆ ಏನೆ?
ನನ್ನ ಸಂತತಿ ಇಲ್ಲಿ ಬರಲಾರರಿನ್ನು
ತಗೋ ನಿಮ್ಮ ಕುಲಕೆ ಈ ಹಿಡಿಶಾಪವನ್ನು!
ಸಹಿಸಿದೆ ಹಗಲಿರುಳ ವಾಹನದ ಅಬ್ಬರ
ಹಗಲಿನಲಿ ನೆರಳಾದೆ ಹಾಕಿ ಎಲೆ ಚಪ್ಪರ
ತಂಗಾಳಿ ಸಿಹಿಗಾಳಿ ಬೇಕೆ ನಿನಗೆ?
ನನ್ನಂತೆ ಮರಣವೆ ಕೊನೆಗೆ ನಿನಗೆ
Subscribe to:
Posts (Atom)